ಡಾ. ಕೆ. ಕಸ್ತೂರಿರಂಗನ್: ಭಾರತೀಯ ವಿಜ್ಞಾನ ಮತ್ತು ಶಿಕ್ಷಣಕ್ಕೆ ಅಮೂಲ್ಯ ಕೊಡುಗೆಬೆಂಗಳೂರು, ಏಪ್ರಿಲ್ 25, 2025: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಾಜಿ ಅಧ್ಯಕ್ಷ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ (84) ಅವರು ಇಂದು ಬೆಂಗಳೂರಿನಲ್ಲಿ ನಿಧನರಾದರು. 1994 ರಿಂದ 2003 ರವರೆಗೆ ಇಸ್ರೋದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಪದ್ಮಶ್ರೀ (1982), ಪದ್ಮಭೂಷಣ (1992), ಮತ್ತು ಪದ್ಮವಿಭೂಷಣ (2000) ಪ್ರಶಸ್ತಿಗಳಿಂದ […]
ಜನನ ಮತ್ತು ಬಾಲ್ಯ (1907) ಭಗತ್ ಸಿಂಗ್ ಅವರು 1907ರ ಸೆಪ್ಟೆಂಬರ್ 28ರಂದು ಬ್ರಿಟಿಷ್ ಭಾರತದ ಪಂಜಾಬ್ನ ಲಾಯಲ್ಪುರ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ (ಈಗ ಪಾಕಿಸ್ತಾನದ ಫೈಸಲಾಬಾದ್ನಲ್ಲಿ) ಜನಿಸಿದರು. ಅವರ ಕುಟುಂಬ ಸಿಖ್ ಸಮುದಾಯಕ್ಕೆ ಸೇರಿದ್ದು, ತಂದೆ ಕಿಶನ್ ಸಿಂಗ್ ಮತ್ತು ಚಿಕ್ಕಪ್ಪ ಅಜಿತ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಭಗತ್ ಸಿಂಗ್ ಜನಿಸಿದಾಗಲೇ ಅವರ ತಂದೆ ಮತ್ತು ಚಿಕ್ಕಪ್ಪ ಬ್ರಿಟಿಷ್ ಕಾನೂನುಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಜೈಲಿನಲ್ಲಿದ್ದರು. ಚಿಕ್ಕ ವಯಸ್ಸಿನಲ್ಲೇ ಭಗತ್ ಸಿಂಗ್ ಅವರ ಮೇಲೆ […]
ನೀವೆಲ್ಲರೂ ಬಟ್ಟೆಯನ್ನು ತೊಳೆಯುವ ವಾಷಿಂಗ್ ಮಷೀನ್ ನೋಡಿದ್ದೀರಿ ಮತ್ತು ಬಳಸುತ್ತಿದ್ದೀರಿ ಆದರೆ ಇಲ್ಲೊಂದು ಹೊಸ ಮಶೀನು ಇದೆ ಇದು ಮನುಷ್ಯರನ್ನು ತೊಳೆಯುವ ಅಥವಾ ಮನುಷ್ಯರು ಜಳಕ ಮಾಡಲು ಬಳಸಬಹುದಾದ ವಾಷಿಂಗ್ ಮಶೀನ್ ಇದನ್ನು ಜಪಾನ್ ಕಂಪನಿ ಸಾನಿಯೋ ಎಲೆಕ್ಟ್ರಿಕ್ ೧೯೭೦ ರಲ್ಲಿ ಓಸಾಕಾ ಎಕ್ಸ್ಪೋ ನಲ್ಲಿ ಪ್ರಸ್ತುತಪಡಿಸಿತ್ತು ಆದರೆ ಅಂದಿನಿಂದ ಇಂದಿನವರೆಗೂ ಇದನ್ನು ಮಾರುಕಟ್ಟೆಗೆ ತರಲಾಗಿರಲಿಲ್ಲ ಆದರೆ ಈಗ ಸಮಿಯೋ ಎಲೆಕ್ಟ್ರಿಕ್ ಕಂಪನಿ ಜೊತೆಗೂಡಿದ ಪ್ಯಾನಸೋನಿಕ್ ಎಲೆಕ್ಟ್ರಿಕ್ ಕಂಪನಿ ೨೦೨೪ ರ ಹೊಸಾಕಾ-ಕನಾಯ್ ವಿಜ್ಞಾನ ಎಕ್ಷ್ಪೋದಲ್ಲಿ ಇದನ್ನು […]
ನಮ್ಮ ಮಕ್ಕಳನ್ನು ಅವರು ಶಾಲಾತರಗತಿಗಳಲ್ಲಿ ಪಡೆಯುವ ಅಂಕಗಳನ್ನು ನೋಡಿ ಅವರು ದಡ್ಡ ಅಥವಾ ಜಾಣ ಎಂದು ತಿಳಿಯದಿರಿ ಕಾರಣ ದೊಡ್ಡವರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಟ್ಟವರಲ್ಲಿ ಬಹುತೇಕರು ತರಗತಿಯಲ್ಲಿ ಹಿಂದೆ ಬಿದ್ದವರ ಸಾಲಿಗೆ ಸೇರುತ್ತಾರೆ.
ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಣಗಾಡುತ್ತಿದ್ದಾರೆ ಕಾರಣ ಶಿಕ್ಷಣ ಸಂಸ್ಥೆಗಳ ವೆಚ್ಚಗಳು. ನಮ್ಮ ಜನ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಥೆ ಅಥವಾ ಸುಸಜ್ಜಿತ ಶಾಲೆಯಲ್ಲಿ ಕಲಿಸಿದರೆ ಮಾತ್ರ ಬುದ್ದಿ ಬರುತ್ತದೆ ಜೊತೆಗೆ ಸರಕಾರಿ ಶಾಲೆಗಳ ಮೇಲೆ ತಾತ್ಸಾರ ಮನೋಭಾವ, ಸರಕಾರಿ ಉದ್ಯೋಗದ ಮೇಲೆ ಅತಿ ಹೆಚ್ಚು ಪ್ರೀತಿ . ಯಾಕಿಷ್ಟು ಅಸಡ್ಡೆತನ ನಮ್ಮ ಜನಕ್ಕೆ. ಇತ್ತೀಚಿಗೆ ಜನರ ಬಳಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಜನರ ಬಳಿ ಅತಿ ಹೆಚ್ಚು […]
ಸೂರ್ಯನ ಸುತ್ತ ಆದಿತ್ಯ ನನ್ನ ಗಿರ್ಕಿ ಹೊಡಿಸಲು ಇಸ್ರೋ ತಯಾರಿಚಂದ್ರಯಾನ-೩ ಪಯಣ ನಾವು ನೀವೆಲ್ಲ ಸಣ್ಣವರು ಇರುವಾಗ ಅಮ್ಮ ರಾತ್ರಿಯ ಊಟ ಮಾಡಿಸುವಾಗ ಚಂದ್ರನನ್ನು ಬೆರಳು ಮಾಡಿ ತೋರಿಸಿ ಬೆಳ್ಳನೆಯ ಗುಂಡು ಗುಂಡಾದ ಆಕಾಶಕಾಯಿ ಯನ್ನು ತೋರಿಸುತ್ತಿದ್ದಳು, ಅದೇ ಖುಷಿಯಲ್ಲಿ ನಾವು ನೀವೆಲ್ಲ ಅವರು ಕೊಡುತಿದ್ದ ಮಮ್ಮು (ಕೂಳು, ರೈಸ್) ತಿನ್ನುತ್ತಿದ್ದೆವು.ಆದರೆ ಅಂದಿನ ಚಿತ್ರ ಇಂದು ಕಾಣುವ ಪರಿ ಬದಲಾಗಿದೆ, ಎಲ್ಲೋ ದೂರದಲ್ಲಿ ಕಾಣುತಿದ್ದ ಆಕಾಶದ ಚಂದ್ರನನ್ನು ಹತ್ತಿರವಾಗಿಸಿಕೊಳ್ಳುತಿದ್ದೇವೆ. ಭೂಮಿಯನ್ನು ದಾಟಿ ಆಕಾಶದಲ್ಲಿ ಬೇರೊಂದು ಗ್ರಹದಲ್ಲಿ ಏನಿದೆ […]
ಹಾವು ಎಂಬುದು ಸರಿಸೃಪ (ತೆವಳಿಕೊಂಡು ನಡೆಯುವುದು) ಆಗಿರುವುದರಿಂದ ಅವುಗಳಿಗೆ ತಮ್ಮದೇ ಆದಂತಹ ಆಹಾರ ಜೀರ್ಣ ಶಕ್ತಿ ಇರುತ್ತದೆ. ಮನುಷ್ಯ ಹಸಿ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಮಾನವ ನಾಗರೀಕತೆ ಬೆಳೆದಂತೆ ಬೆಂಕಿ ಕಂಡುಕೊಂಡು ತಿನ್ನುವ ಆಹಾರವನ್ನು ಬೇಯಿಸಿ ತಿನ್ನಲು ಆರಂಬಿಸಿದ ಆದರೇ ಅದಕ್ಕಿಂತಲೂ ಮೊದಲು ಹುಲು ಮಾನವರು ಬೇಟೆಯಾಡಿದ ಪ್ರಾಣಿಗಳನ್ನು, ಗಡ್ಡೆ ಗೆಣಸು ತರಕಾರಿಗಳನ್ನು ಹಾಗೆಯೇ ಹಸಿ ಹಸಿಯಾಗಿ ತಿನ್ನುತ್ತಿದ್ದರು ಕಾರಣ ಅವನಿಗೆ ಜೀರ್ಣಿಸಿ ಕೊಳ್ಳುವ ಶಕ್ತಿ ಪ್ರಭಾವ, ಅದೇ ತರಹ ಬೇರೆ ಬೇರೆ ಪ್ರಾಣಿಗಳಿಗೆ […]